ಅರಿವು

ಮೋಹ ಮದ ಮತ್ಸರತುಂಬಿ
ಹೂಂಕರಿಸಿದ ಮನುಷ್ಯ
ವಯಸಾದಂತೆ ಸುಸ್ತಾಗಿ
ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ.
ಕೊಳ್ಳುವವರು ಯಾರೂ ಇಲ್ಲ
ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ
ಕತ್ತಲು ಕೋಣೆ ಸೇರುವ ದುಃಖ.

ದೂರದೆಲ್ಲಿಂದಲೋ ದಯಾಮಯಿಗಳ
ಮೃದುಮಾತು, ಕೊಳ್ಳುವಿಕೆ
ಆಶ್ರಯದಾತರ ಪ್ರೀತಿ ಕರುಣಾಳು
ಕ್ಷಮಿಸಿತ್ತು.
ತಪ್ಪೊಪ್ಪಿಗೆಯ ಅವರವರ ಅಂತರಂಗಕೆ
ಹೊತ್ತಿತು ಬೆಳಕಿನ ಕಿರಣ.

ಮೋಡಕಾ ಬಜಾರದಂಗಡಿಗಳು ಮುಚ್ಚಿ
ವೃದ್ಧಾಶ್ರಮದ ಬಾಗಿಲು ತೆರೆದು
ಒಳಹೊಗುವಾಗ ಕಣ್ತುಂಬ ತಿಳಿನೀರು
ತುಳುಕಗೊಡದೇ ಅದರೊಳಗೇ
ತನ್ನ ತಾ ಪ್ರತಿಫಲಿಸಿಕೊಂಡ ಅರಿವು
ಅನಂತದೆಡೆಗೆ ಕಣ್ಮುಚ್ಚುವ
ಪ್ರಶಾಂತತೆಯ ಚಿತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವಲೀಲೆ
Next post ಒಂದೇ ‘ವರ’

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys